'ಜೀವನವೆಂಬುದು ಹೂವಿನ ಹಾಸಿಗೆಯಲ್ಲ' ಎಂಬ ಹಳೆಯ ಉಕ್ತಿಯಲ್ಲಿ ಅಪೂರ್ಣತೆ ಇದೆ. “ಜೀವನವೆಂಬುದು ಹೂವಿನ ಹಸಿಗೆಯಲ್ಲ; ಇದೊಂದು ನಿರಂತರ ಹೋರಾಟ ಎಂಬ ಉತ್ತರ ವಾಕ್ಯವನ್ನು ಪ್ರೊ. ಕೆ. ಎಸ್. ಶರ್ಮಾ ಅವರು ಸೇರಿಸಿ ಉಕ್ಕಿಯಲ್ಲಿ ಪೂರ್ಣತೆಯನ್ನು ಸಾಧಿಸಿದ್ದಾರೆ.ಉಕ್ತಿಯ ಪೂರ್ಣತೆ ಕ್ರಿಯೆಯಿಂದ ಸಜೀವವಾಗಿ ಸಂವಹನ ಸಾಮರ್ಥ್ಯವನ್ನು ಪಡೆಯುತ್ತದೆ. ನಾಟಕವೆಂದರೆ ಅನಂತಕ್ರಿಯೆಗಳ ಪ್ರವಾಹ.ಈ ಪ್ರಜ್ಞಾ ಪ್ರವಾಹವನ್ನು ಶೋಷಿತಸನಾಂಗಕ್ಕೆ ತಲುಪಿಸಿ ಅವರನ್ನು ಎಚ್ಚರಿಸಿ ಕ್ರಿಯಾಶೀಲರನ್ನಾಗಿಮಾಡುವುದು 'ಹೋರಾಟ' ನಾಟಕ ಸೃಷ್ಟಿಯ ಹಿರಿಯ ಉದ್ದೇಶ.ಈ ಉದ್ದೇಶ ಸಫಲವಾಗಬೇಕಾದರೆ ಹೋರಾಟ ನಾಟ ಕದ ಸತತ ಪ್ರಯೋಗಗಳಾಗಿ 'ಭೂಮಿ ತಾಯಿಯ ಚೊಚ್ಚಿಲ ಮಕ್ಕಳಾದ ಬಡ ರೈತರು ಜಮೀನದಾರರ ಮದೋನ್ಮತತೆ ರನ್ನು ಸಂಹರಿಸಿ, ವರ್ಗ ರಹಿತ ಸಮಾಜವನ್ನು ಸೃಷ್ಟಿಸಬೇಕು. ಈ ತಳಮಳ ಮತು ಕುದಿ ಈ ನಾಟಕದ ಜೀವಾಳ, ನವ ಸಮಾಬ ಸೃಷ್ಟಿಯ ಪಕ್ವಾನ್ನವನ್ನು ಸಿದ್ಧಪಡಿಸುವುದೇ ಈ ನಾಟಕದ ಗುರಿ,ಪುರೋಗಾಮಿ ಸಾಹಿತ್ಯ ಪ್ರಕಾಶನ,